ಬ್ರಹ್ಮಾವರ : ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ವಿದ್ಯಾರ್ಥಿಗಳಿಗೆ, ಕಾಲೇಜಿನ “ಮಹಿಳಾ ವೇದಿಕೆ’ ವತಿಯಿಂದ “”ಮಹಿಳಾ ಸಬಲೀಕರಣ ಹಾಗೂ ಯೋಗ ಧ್ಯಾನದ ಮೂಲಕ ಮಾನಸಿಕ ಒತ್ತಡ ನಿರ್ವಹಣೆ” ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿಯ “ಅರ್ಟ್ ಆಫ್ ಲಿವಿಂಗ್ ಟ್ರೈನರ್” ಶ್ರೀಮತಿ ಶೈಲಾಜ ಕೃಷ್ಣನಾನಂದ ಇವರು ವಹಿಸಿದ್ದರು.
ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ ಯೋಗವು ದೇಹ – ಮನಸ್ಸಿನ ಸಮತೋಲನವನ್ನು ಕಾಪಾಡುತ್ತದೆ, ನಿಯಮಿತ ಯೋಗಾಭ್ಯಾಸದಿಂದ ನರಮಂಡಲ ಶಾಂತ ವಾಗುತ್ತದೆ, ಹಾರ್ಮೋನ್ ಸಮತೋಲನ ಸುಧಾರಿಸುತ್ತದೆ ಆತಂಕ ಮತ್ತು ಡಿಪ್ರೆಷನ್ ಕಡಿಮೆಯಾಗುತ್ತದೆ ಎ0ದರು. ಧ್ಯಾನ ವು ಮನಸ್ಸಿನ ತರಬೇತಿ, ಇದು ಚಿಂತನೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಮನಸ್ಸಿಗೆ ಶಾಂತಿ ಸ್ಪಷ್ಟತೆ, ಭಾವನಾತ್ಮಕ ಸಮತೋಲನ ಮಾಡುತ್ತದೆ ದಿನಕ್ಕೆ 10-20ನಿಮಿಷ ಧ್ಯಾನ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ ಎ0ದರು.ಈ ಕಾರ್ಯಕ್ರಮದ ವೇದಿಕೆಯಲ್ಲಿ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಸುಬ್ರಹ್ಮಣ್ಯ, ಆಡಳಿತ ಅಧಿಕಾರಿ ಶ್ರೀಮತಿ ಮಮತಾ, ಕಾಲೇಜಿನ ಪ್ರಾ0ಶುಪಾಲರದ ಶ್ರೀಮತಿ ಡಾ,ಸೀಮಾ ಭಟ್, ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀಮತಿ ರಾಝಿಕ, ಮಹಿಳಾ ವೇದಿಕೆಯ ಮುಖ್ಯಸ್ಥರಾದ ಉಪನ್ಯಾಸಕಿ ಕುಮಾರಿ ಸೊಫಿಯ ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿನಿ ಆಯಿಷಾ ರಿಝ ದ್ವಿತೀಯ ಬಿಸಿಎ , ಸ್ವಾಗತವನ್ನು ವಿದ್ಯಾರ್ಥಿನಿ ಸುಹಾನಾ ದ್ವಿತೀಯ ಬಿಬಿಎ, ಧನ್ಯವಾದವನ್ನು ವಿದ್ಯಾರ್ಥಿನಿ ತುಷಾರ ತೃತೀಯ ಎಫ್, ಟಿ ಮಾಡಿದರು.
