
ಬ್ರಹ್ಮಾವರ: ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರದಲ್ಲಿ ವಿದ್ಯಾರ್ಥಿಗಳಿಗೆ ಫ್ಯಾಷನ್ ಡಿಸೈನ್ ವಿಭಾಗದ ವತಿಯಿಂದ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಆಗಿ ಶ್ರೀಮತಿ ಪ್ರೇಮ ಆರ್ ಶೆಟ್ಟಿ,ಇಂಗ್ಲೀಷ್ ಶಿಕ್ಷಕಿ, ಸರಕಾರಿ ಪದವಿ ಪೂರ್ವ ಕಾಲೇಜು ಮುಲ್ಕಿ, ಇವರು ವಹಿಸಿದ್ದರು.ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಲಾಯಿತು.ವಿದ್ಯಾರ್ಥಿಗಳನ್ನು ಉದ್ದೇಶಿಸಿ ” ಫ್ಯಾಷನ್ ಕ್ಷೇತ್ರವೂ ಕೇವಲ ಬಟ್ಟೆಗಳನ್ನು ವಿನ್ಯಾಸ ಮಾಡುವುದು ಮಾತ್ರವಲ್ಲ ಅದು ನಮ್ಮ ಸೃಜನಶೀಲತೆ ಕಲ್ಪನೆ, ಮತ್ತು ಆತ್ಮವಿಶ್ವಾಸವನ್ನು ತೋರಿಸುವ ಒಂದು ಕಲೆಯಾಗಿದೆ ಎ0ದರು, ಹಾಗೂ ಜೀವನದಲ್ಲಿ ಯಶಸ್ಸು ಗಳಿಸಲು ‘ಗುರಿ ನಿಗದಿ’ ಬಹಳ ಮುಖ್ಯ, ಆ ಗುರಿಯನ್ನು ಸಾಧಿಸಲು ದಿನನಿತ್ಯ ಸಣ್ಣ ಸಣ್ಣ ಹೆಜ್ಜೆಗಳನ್ನು ಇಡಬೇಕು, ಈ ಮೂಲಕ ನಿಮ್ಮ ಗುರಿಯನ್ನು ತಲುಪಬಹುದು ಎ0ದರು. ಕಾರ್ಯಕ್ರಮದ ವೇದಿಕೆಯಲ್ಲಿ ವಿದ್ಯಾಲಕ್ಷ್ಮೀ ಕಾಲೇಜಿನ ಸಂಸ್ಥಾಪಕರಾದ ಶ್ರೀ ಸುಬ್ರಹ್ಮಣ್ಯ, ಪ್ರಾ0ಶುಪಾಲರದ ಶ್ರೀಮತಿ ಡಾ, ಸೀಮಾ ಭಟ್. ಕಾಲೇಜಿನ ಆಡಳಿತ ಅಧಿಕಾರಿ ಶ್ರೀಮತಿ ಮಮತಾ. ಉಪ ಪ್ರಾ0ಶುಪಾಲರದ ಶ್ರೀಮತಿ ಸುಜಾತಾ,ಕಾಲೇಜಿನ ಸಾಂಸ್ಕೃತಿಕ ಅಧ್ಯಕ್ಷೆ ಶ್ರೀಮತಿ ರಾಝಿಕ, ಫ್ಯಾಷನ್ ಡಿಸೈನ್ ವಿಭಾಗದ ಮುಖ್ಯಸ್ಥರಾದ ,ಕುಮಾರಿ ಜನಿತಾ ಉಪಸ್ಥಿತರಿದ್ದರು.ಕಾರ್ಯಕ್ರಮದ ನಿರೂಪಣೆಯನ್ನು ಪ್ರಥಮ ಎಫ್,ಡಿ ವಿದ್ಯಾರ್ಥಿನಿ ಅಲಿನ ,ಸ್ವಾಗತವನ್ನು ತೃತೀಯ ಎಫ್,ಡಿ ವಿದ್ಯಾರ್ಥಿನಿ ವೃಂದ, ಧನ್ಯವಾದವನ್ನು ದ್ವಿತೀಯ ಎಫ್,ಡಿ ವಿದ್ಯಾರ್ಥಿನಿ ನವ್ಯ ಅವರು ನಡೆಸಿಕೊಟ್ಟರು.
