webnews kannada

ಬ್ರಹ್ಮಾವರದಲ್ಲೊಂದು ಅಮಾನವೀಯ ಘಟನೆ

9ನೇ ತರಗತಿ ಬಾಲಕನ ಅಪಹರಿಸಿ ಹಲ್ಲೆ, ಇಬ್ಬರು ಅರೆಸ್ಟ್!

 

ತಾರೇಶ್‌(38), ತಂದೆ:  ನರಸಿಂಹ, ಮಟಪಾಡಿ    ಇವರ ಮಗನಾದ ಅಪ್ರಾಪ್ತ ವಯಸ್ಸಿನ ತಿಲಕ ಎಂಬುವನು ಬ್ರಹ್ಮಾವರ ಸರ್ಕಾರಿ ಬೋರ್ಡ್‌ ಹೈಸ್ಕೂಲ್‌ನಲ್ಲಿ 9ನೇ ತರಗತಿ ಕಲಿಯುತ್ತಿದ್ದು, ದಿನಾಂಕ 01/06/2026 ರಂದು ಬೆಳಿಗ್ಗೆ 08:30 ಗಂಟೆಗೆ ಆರೋಪಿತರು  ಮಗನನ್ನು ಬ್ರಹ್ಮಾವರ ಬಸ್‌ ನಿಲ್ದಾಣದಿಂದ ಅಪಹರಿಸಿಕೊಂಡು ಕೇರಳ ರಾಜ್ಯದ ತಲಪಾಡಿ ಕುಂಜತ್ತೂರು ಪದವು ಎಂಬಲ್ಲಿರುವ ವುಡ್‌ ಕಂಪೆನಿಗೆ ಬಲತ್ಕಾರದಿಂದ ಕರೆದುಕೊಂಡು ಹೋಗಿ ಕೆಲಸಕ್ಕೆ ಸೇರಿಸಿದ್ದು,  ಈ ಬಗ್ಗೆ ಅಪ್ರಾಪ್ತ ಬಾಲಕನು ಮನೆಗೆ ಹೋಗುತ್ತೇನೆಂದು ಹೇಳಿದರೂ ಕೂಡ ಆತನಿಗೆ ದಿನಾಂಕ 09/06/2026 ರಂದು ಅವರು ವಾಸವಿದ್ದ ಕೋಣೆಯಲ್ಲಿ ಮದ್ಯಾಹ್ನ 1:30 ಗಂಟೆಗೆ ಆರೋಪಿತರಾದ ಸುಚಿತ್‌ನು ವಯರ್‌ನಿಂದ ಹಲ್ಲೆ ಮಾಡಿ ವಿಖ್ಯಾತನು ಆತನ ಕೈಯಲ್ಲಿದ್ದ ಚೂರಿಯನ್ನು ತೋರಿಸಿ ಈ ವಿಚಾರ ಯಾರಿಗಾದರೂ ಹೇಳಿದರೆ ನಿನ್ನನ್ನು ಕೊಲೆ ಮಾಡುವುದಾಗಿ ಜೀವ ಬೆದರಿಕೆ  ಹಾಕಿ, ಅವಾಚ್ಯ ಶಬ್ದದಿಂದ ನಿಂದನೆ ಮಾಡಿದ್ದು, ಈ ಕೃತ್ಯವನ್ನು ಅಲ್ಲೇ ಇದ್ದ ವ್ಯಕ್ತಿ ಒಬ್ಬ ಮೊಬೈಲ್‌ನಲ್ಲಿ ವೀಡಿಯೊ ಮಾಡಿರುವುದಾಗಿದೆ.

ಈ ಬಗ್ಗೆ  ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 117/2026 U/s. 137(2),115(2), 352,351(3) R/W 3(5) BNS and 75 JJ ACT and 3(1)(r), 3(1)(s), 3(2)(v-a) SC/ST (POA) 1989 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ಈ ಪ್ರಕರಣದ ಆರೋಪಿಗಳಾದ 1) ವಿಖ್ಯಾತ್‌ ಆಚಾರ್ಯ(19), ಮತ್ತು 2) ಸುಚಿತ್‌ ನಾಯಕ್‌(20), ಯವರನ್ನು ದಸ್ತಗಿರಿ ಮಾಡಲಾಗಿದ್ದು, ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು.  ಮೂರನೇ ಅಪರಾದಿ ಬಾಲಾಪರಾಧಿಯಾಗಿದ್ದು ಭಾಲ ನ್ಯಾಯಮಂಡಳಿ ಮುಂದೆ ಹಾಜರುಪಡಿಸಲಾಗಿದೆ.

ಅಮೆಜಾನ್ ನಲ್ಲಿ ಸ್ಮಾರ್ಟ್ ವಾಚ್ ನಿಮಗಾಗಿ

Leave a Reply

Your email address will not be published. Required fields are marked *