
ಜನಸೇವಾ ಟ್ರಸ್ಟ್ ಗಿಳಿಯಾರು ಆಶ್ರಯದಲ್ಲಿ ಅಭಿಮತ ಸಂಭ್ರಮ ಕಾರ್ಯಕ್ರಮ ಫೆ.14ರಂದು ಸಂಜೆ 6ಗಂಟೆಗೆ ಬ್ರಹ್ಮಾವರ ಗಾಂಧೀ ಮೈದಾನದಲ್ಲಿ ಜರಗಲಿದೆ.ಈ ಪ್ರಯುಕ್ತ ಆರಂಭದಲ್ಲಿ ನೃತ್ಯವಸಂತ ನಾಟ್ಯಾಲಯ ಕುಂದಾಪುರ ಆಶ್ರಯದಲ್ಲಿನೃತ್ಯೋಪಾಸನೆ ಕಾರ್ಯಕ್ರಮ ನಡೆಯಲಿದ್ದು, ಅನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿಮುಂಬೈ ಪೊಲೀಸ್ ಇಲಾಖೆಯ ನಿವೃತ್ತ ಎ.ಸಿ.ಪಿ. ಎಣ್ಣೆಹೊಳೆ ದಯಾ ನಾಯಕ್ ಅವರಿಗೆ ಅಭಿಮತಕೀರ್ತಿ ಕಲಶ
ಮಹಾಗೌರವ ನೀಡಿ ಗೌರವಿಸಲಾಗುವುದು ಹಾಗೂ ತುಳು ಜಾನಪದ ವಿದ್ವಾಂಸಬನ್ನಂಜೆ ಬಾಬು ಅಮೀನ್, ಸೂಲಗಿತ್ತಿ ಲಕ್ಷ್ಮೀ ಪೂಜಾರಿ, ಯಶಸ್ವಿ ಕಲಾವೃಂದ ತೆಕ್ಕಟ್ಟೆಸಂಸ್ಥೆಗಳಿಗೆ ಯಶೋಗಾಥೆ ಗೌರವ ನೀಡಿ ಗೌರವಿಸಲಾಗುವುದ. ಚಿತ್ರನಟ ರಿಷಬ್ ಶೆಟ್ಟಿಆಳ್ವಾಸ್ ಪ್ರತಿಷ್ಠಾನದ ಡಾ.ಮೋಹನ್ ಅಳ್ವಾ, ಡಾ.ಕೆ.ಪ್ರಕಾಶ್ ಶೆಟ್ಟಿ ಮೊದಲಾದವರುಉಪಸ್ಥಿತರಿರುವರು.ಖ್ಯಾತ ಹಿನ್ನಲೆ ಗಾಯಕ ವಿಜಯ ಪ್ರಕಾಶ್ ಮತ್ತು ತಂಡದಿಂದ ಸಿಂಗಾರ ಸಿರಿ ಸಂಗೀತಕಾರ್ಯಕ್ರಮ ನಡೆಯಲಿದ್ದು, ಶರತ್ ಶೆಟ್ಟಿ ಕೊತ್ತಾಡಿ, ಸಹ ಸಂಚಾಲಕರು
ಅರುಣ್ ಶೆಟ್ಟಿ ಗಿಳಿಯಾರ್, ಖಜಾಂಚಿ
ಅಶೋಕ್ ಶೆಟ್ಟಿ ಬನ್ನಾಡಿ, ಕಾರ್ಯದರ್ಶಿ
ಸ್ವಾಗತ ಸಮಿತಿ ಪ್ರಮುಖರಾದ ಸುಜೀರ್ ಶೆಟ್ಟಿ, ನಿಖಿಲ್ ನಾಯಕ್ ನಿರೂಪಕಿ ಅನುಶ್ರೀ ಮೊದಲಾದವರು ಉಪಸ್ಥಿತರಿರುವರು.
