ಫೆಬ್ರವರಿ 14ಕ್ಕೆ ಬ್ರಹ್ಮಾವರದಲ್ಲಿ ಅಭಿಮತ ಸಂಭ್ರಮ; ಪೂರ್ವಭಾವಿ ಸಭೆ
ಹುಲಿ
ಕೋಟ: ಮೂಡುಗಿಳಿಯಾರಿನ ಜನಸೇವಾ ಟ್ರಸ್ಟ್ ಆಯೋಜಿಸುವ ಅಭಿಮತ ಸಂಭ್ರಮ 2026 ರ ಫೆಬ್ರವರಿ ತಿಂಗಳ ಹದಿನಾಲ್ಕನೇ ತಾರೀಕಿನಂದು ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ನಡೆಯಲಿದೆ ಎನ್ನುವುದಾಗಿ ಜನಸೇವಾ ಟ್ರಸ್ಟ್ ಅಧ್ಯಕ್ಷ ವಸಂತ್ ಗಿಳಿಯಾರ್ ವಡ್ಡರ್ಸೆಯಲ್ಲಿ ನಡೆದ ಅಭಿಮತ ಸಂಭ್ರಮದ ಪೂರ್ವಭಾವಿ ಸಭೆಯಲ್ಲಿ ತಿಳಿಸಿದರು.
ಅಭಿಮತ ಸಂಭ್ರಮ ಎನ್ನುವುದು ರಾಜ್ಯದಲ್ಲೇ ಒಂದು ಮಾದರಿ ಕಾರ್ಯಕ್ರಮವಾಗಿ ರೂಪುಗೊಂಡಿದ್ದು ಕಾರ್ಯಕ್ರಮದ ಆಯೋಜನೆಯನ್ನ ಅಧ್ಯಯನ ದೃಷ್ಟಿಯಿಂದಲೇ ವೀಕ್ಷಿಸಲು ಹಲವು ಸಂಘಟಕರು ಆಗಮಿಸುತ್ತಾರೆ ಎಂದು ಡಾ. ಜಗಧೀಶ್ ಶೆಟ್ಟಿ ಅಭಿಪ್ರಾಯ ಪಟ್ಟರು.
ಪ್ರತೀ ವರ್ಷವೂ ಜನಸೇವಾ ಟ್ರಸ್ಟ್ ಸಮಾಜದ ಶ್ರೇಷ್ಠ ಸಾಧಕರಿಗೆ ಕೊಡಮಾಡುವ ಯಶೋಗಾಥೆ ಪುರಸ್ಕಾರ ಮತ್ತು ‘ಕೀರ್ತಿ ಕಲಶ’ ಪುರಸ್ಕಾರದ ಆಯ್ಕೆಯ ಕುರಿತು ಟೀಮ್ ಅಭಿಮತದ ಸದಸ್ಯರಿಂದ ಸೂಚನೆಗಳನ್ನು ಪಡೆಯಲಾಯಿತು.
ಕಾರ್ಯಕ್ರಮದಲ್ಲಿ ಟೀಮ್ ಅಭಿಮತ ಸಂಚಾಲಕ ಪ್ರವೀಣ್ ಯಕ್ಷಿಮಠ ಸಂಯೋಜಕರಾದ ಉದಯ್ ಪಡುಕರೆ, ಸ್ವಾಗತ ಸಮಿತಿ ಅಧ್ಯಕ್ಷ ಕೆ.ಸಿ. ರಾಜೇಶ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅನಾರೋಗ್ಯ ಪೀಡಿತರಿಗೆ ಸಹಾಯಧನದ ಚೆಕ್ ವಿತರಣೆ ಮಾಡಲಾಯಿತು.
ಟೀಮ್ ಅಭಿಮತ ಸಹ ಸಂಚಾಲಕ ಶರತ್ ಶೆಟ್ಟಿ ವಡ್ಡರ್ಸೆ ಸ್ವಾಗತಿಸಿ, ಟೀಮ್ ಅಭಿಮತದ ಪ್ರಮುಖರಾದ ಸಂತೋಷ್ ಶೆಟ್ಟಿ ಕೊತ್ತಾಡಿ ಧನ್ಯವಾದ ಸಮರ್ಪಸಿ ಕಾರ್ಯನಿರ್ವಣಧಿಕಾರಿ ರಾಘವೇಂದ್ರ ರಾಜ್ ಸಾಸ್ಥಾನ ಕಾರ್ಯಕ್ರಮ ನಿರೂಪಿಸಿದರು..
ಹುಲಿ
ಕೋಟ: ಮೂಡುಗಿಳಿಯಾರಿನ ಜನಸೇವಾ ಟ್ರಸ್ಟ್ ಆಯೋಜಿಸುವ ಅಭಿಮತ ಸಂಭ್ರಮ 2026 ರ ಫೆಬ್ರವರಿ ತಿಂಗಳ ಹದಿನಾಲ್ಕನೇ ತಾರೀಕಿನಂದು ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ನಡೆಯಲಿದೆ ಎನ್ನುವುದಾಗಿ ಜನಸೇವಾ ಟ್ರಸ್ಟ್ ಅಧ್ಯಕ್ಷ ವಸಂತ್ ಗಿಳಿಯಾರ್ ವಡ್ಡರ್ಸೆಯಲ್ಲಿ ನಡೆದ ಅಭಿಮತ ಸಂಭ್ರಮದ ಪೂರ್ವಭಾವಿ ಸಭೆಯಲ್ಲಿ ತಿಳಿಸಿದರು.
ಅಭಿಮತ ಸಂಭ್ರಮ ಎನ್ನುವುದು ರಾಜ್ಯದಲ್ಲೇ ಒಂದು ಮಾದರಿ ಕಾರ್ಯಕ್ರಮವಾಗಿ ರೂಪುಗೊಂಡಿದ್ದು ಕಾರ್ಯಕ್ರಮದ ಆಯೋಜನೆಯನ್ನ ಅಧ್ಯಯನ ದೃಷ್ಟಿಯಿಂದಲೇ ವೀಕ್ಷಿಸಲು ಹಲವು ಸಂಘಟಕರು ಆಗಮಿಸುತ್ತಾರೆ ಎಂದು ಡಾ. ಜಗಧೀಶ್ ಶೆಟ್ಟಿ ಅಭಿಪ್ರಾಯ ಪಟ್ಟರು.
ಪ್ರತೀ ವರ್ಷವೂ ಜನಸೇವಾ ಟ್ರಸ್ಟ್ ಸಮಾಜದ ಶ್ರೇಷ್ಠ ಸಾಧಕರಿಗೆ ಕೊಡಮಾಡುವ ಯಶೋಗಾಥೆ ಪುರಸ್ಕಾರ ಮತ್ತು ‘ಕೀರ್ತಿ ಕಲಶ’ ಪುರಸ್ಕಾರದ ಆಯ್ಕೆಯ ಕುರಿತು ಟೀಮ್ ಅಭಿಮತದ ಸದಸ್ಯರಿಂದ ಸೂಚನೆಗಳನ್ನು ಪಡೆಯಲಾಯಿತು.
ಕಾರ್ಯಕ್ರಮದಲ್ಲಿ ಟೀಮ್ ಅಭಿಮತ ಸಂಚಾಲಕ ಪ್ರವೀಣ್ ಯಕ್ಷಿಮಠ ಸಂಯೋಜಕರಾದ ಉದಯ್ ಪಡುಕರೆ, ಸ್ವಾಗತ ಸಮಿತಿ ಅಧ್ಯಕ್ಷ ಕೆ.ಸಿ. ರಾಜೇಶ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅನಾರೋಗ್ಯ ಪೀಡಿತರಿಗೆ ಸಹಾಯಧನದ ಚೆಕ್ ವಿತರಣೆ ಮಾಡಲಾಯಿತು.
ಟೀಮ್ ಅಭಿಮತ ಸಹ ಸಂಚಾಲಕ ಶರತ್ ಶೆಟ್ಟಿ ವಡ್ಡರ್ಸೆ ಸ್ವಾಗತಿಸಿ, ಟೀಮ್ ಅಭಿಮತದ ಪ್ರಮುಖರಾದ ಸಂತೋಷ್ ಶೆಟ್ಟಿ ಕೊತ್ತಾಡಿ ಧನ್ಯವಾದ ಸಮರ್ಪಸಿ ಕಾರ್ಯನಿರ್ವಣಧಿಕಾರಿ ರಾಘವೇಂದ್ರ ರಾಜ್ ಸಾಸ್ಥಾನ ಕಾರ್ಯಕ್ರಮ ನಿರೂಪಿಸಿದರು..



